Wednesday 8 February 2012

ಚಿತ್ರ ನೋಡಿ ಕವನ ಬರೆಯಿರಿ ==>> ಫೆಸ್`ಬುಕ್ ಲಿಂಕ್

ಚಿತ್ರ ನೋಡಿ ಕವನ ಬರೆಯಿರಿ - 1



ನಮಗಿರೆಂಬೆಯೇ ಹಾಸಿಗೆಯಾಗಿಹುದು
ನಮ್ಮತ್ತ ಸುಳಿಯದಿಹುದು ಚಿಂತೆಯೆಂಬ ಭಾವ 
ನಿದ್ದೆಯೆಂಬ ಭಾವ ಆವರಿಸಿಹುದು ನಮ್ಮನ್ನು 
ನಮಗಳ ಶಾಖವೇ ಹೊದಿಕೆಯಾಗಿಹುದು 
ನಾವೇ ಸುಖಿಗಳಾಗಿಹು... 
ನಮ್ಮ ಸುಖ ನಿಮಗಿಲ್ಲದಿಹುದು...!!!! 

December 29, 2011 at 10:14pm 
************************************************


ನಾವೆಲ್ಲಾ ಒಂದೇ ಬಳಗ 
ಮಾಡೆವು ನಾವೆಂದು ಕಾಳಗ 
ಒಗ್ಗಟ್ಟೇ ನಮ್ಮ ಬಲ 
ಎದುರಿಸುವೆವು ಈ ಚಳಿಗಾಲ ... 

December 29, 2011 at 11:03pm 
************************************************


ಮುಖ ಯಾಕೆ ತಿರುಗಿಸಿಕೊಂಡು ಮಲಗಿದ್ದೀರಾ ಸುಂದರಿಯರೇ...?
ನಿಮ್ಮ ಸೌಂದರ್ಯಕ್ಕೆ ಮರುಳಾಗಿ ಯಾರಾದರೂ ಕೊಂಡೊಯ್ದರೇ?? ಅನ್ನೊ ನಾಚಿಕೆಯೆ..? 

December 29, 2011 at 11:24pm 
************************************************


ನೂರಾದರೇನು ನಮ್ಮ ಬಣ್ಣ 
ನಾವೆಂದು ಒಂದೇ ಅಣ್ಣ... 
ನಮ್ಮಂತೆ ನೀವಿರಲೆಂಬ 
ನಮ್ಮ ಬಯಕೆಗೆ ನೀರೆರೆಯಿರಣ್ಣ..:))) 

December 30, 2011 at 6:53am 
************************************************


ಒಬ್ಬರನ್ನೊಬ್ಬರ ತಬ್ಬಿಕೊಳ್ಳಲಾಗದ ವ್ಯಥೆಯ ಮರೆತು
ಸಹೋದರತೆಯ ಮೆರೆದಿರಾ, ತಾಗಿಕೊಂಡು ಕುಳಿತು 

ನೋಡಿ ಕಲಿಯೋ ಮನುಜ ಇವುಗಳೊಳಗಿನ ಅನ್ಯೋನ್ಯತೆಯ 
ಕತ್ತರಿಸಿ ಹಾಕಿರೋ ನಿಮ್ಮ ನಿಮ್ಮೊಳಗಿನ ವೈಷಮ್ಯತೆಯ 

December 30, 2011 at 8:30am 
************************************************


""ನಾವು ಬಣ್ಣದ ಹಕ್ಕಿ,
ಹೆದರಿಸಬೇಡಿ ನಮ್ಮನ್ನು ಕುಕ್ಕಿ, 
ನಮ್ಮಿಂದ ಒಳ್ಳೇದನ್ನು ಹೆಕ್ಕಿ, 
ತಿಂದು ತೇಗಬೇಡಿ ನಮ್ಮ ಮುಕ್ಕಿ."" 

December 30, 2011 at 12:55pm 
************************************************


.. "ಗೂಡಿಲ್ಲದ ಕಾಯಗಳು" 

ಅಲ್ಲಿತ್ತು ನಮ್ಮೂರು
ಸುತ್ತಲೂ ಹಚ್ಚ ಹಸಿರು
ಬಂಧು ಬಳಗ ಸಾವಿರಾರು
ನಮಗೆಂದೇ ಪಕ್ಷಿಧಾಮ 
ಹಸಿರ ನಡುವಲ್ಲಿ ನಮ್ಮ ಪ್ರೇಮ 

ಬಂದು ಇಲ್ಲೀಗ.. ಬದಲಾವಣೆ ಎಂದು 
ಮಾಡಿರುವರು ಎಲ್ಲ ಹಸಿರ ನಿರ್ನಾಮ 
ಮುದ್ದಿನ ಗೂಡುಗಳೆಲ್ಲಾ ಎಲ್ಲೋ ಮಾಯ 
ಈಗ ಅಲೆಮಾರಿ ಜೀವನ ನಮ್ಮ ಕಾರ್ಯ 
       ಮನಸ್ಸಿನ ಒಳಗೀಗ ಆಗಿದೆ ಆರದ ಗಾಯ .. :) 

|| ಪ್ರಶಾಂತ್ ಖಟಾವಕರ್ || 

December 30, 2011 at 7:36pm 
************************************************


‎:ನಾನೂ ಬರೆದೆನೊಂದು:
ನಾನೂ ಬರೆದೆಯೊಂದ ಕವಿತೆ 
ಪದಗಳ ಹುಡುಗಿ ಕವಿತೆಯಂದ್ರೇ ವ್ಹಾ... ಕವಿತೆ 
ಅದ ಕೇಳಿ ತಲೆದೂಗಿ 
ಮಲಗಿದವು ಮೈಮರೆತು ಹಾಯಾಗಿ 

December 30, 2011 at 10:44pm 
************************************************


ಓ ಮರಿಹಕ್ಕಿಗಳೇ ಭಾಗ್ಯವೆಂದರೇ ನಿಮ್ಮದೆ.

ಮರದಿಂದ ಮರಕ್ಕೆ ಹಾರಿ ಬಗೆಬಗೆಯ ಹೂ ಮಕರಂಧವ ಹೀರಿ, ಅಡೆತಡೆಯಿಲ್ಲದೆ ಏರಿಳಿಯುವ ಭಾಗ್ಯವೆಂದರೆ ನಿಮ್ಮದೆ. 

ದೇಶಕಾಲದ ಪರಿವೇ ಇಲ್ಲದೇ, ಗಡಿ,ಗಡಿಯಾರದ ಕಡಿವಾಣವೂ ಇಲ್ಲದೇ. ಜಾತಿ ಧರ್ಮದ ಗೊಡವೇಯೇ ಇಲ್ಲದ ಭಾಗ್ಯವೆಂದರೇ ನಿಮ್ಮದೆ. 

-ನಂದೀಶ್ ಬಂಕೇನಹಳ್ಳಿ 

January 4 at 12:18pm 
************************************************


ನಮಗಿಲ್ಲಾ ಭವ್ಯ ಭಂಗಲೆ-ಮಹಲುಗಳ ಹಂಗು 
ನಮಗಿಲ್ಲಾ ಕನಸುಗಳೆಂಬ ಭವ್ಯ-ಬೃಂಗಗಳ ಗುಂಗು | 

ನಮಗಿಲ್ಲಾ ಊರು-ಕೇರಿ ಉದ್ದರಿಸುವ ಉದ್ದುದ್ದ ಭಾಷಣದ ಪುಂಗಿ 
ನಮಗಿಲ್ಲಾ ದುರಾಶೆ-ದುಂದುವೆಚ್ಚದ ಅಂದಾಭಿಮಾನದ ನಡೆಯ ಡೋಂಗಿ | 

ನಮಗಿಲ್ಲಾ ಜಗದಂಕೆಯನ್ನು ಸಾಧಿಸಬೇಕೆಂಬ ಇನ್ನಿಲ್ಲದ ಆಕಾಂಕ್ಷೆ 
ನಮಗಿಲ್ಲಾ ಜಗದೇಳಿಗೆ ನಮ್ಮಿಂದಲೇ ಆಗಲೆಂಬ ಮಹತ್ವಾಕಾಂಕ್ಷೆ | 

ನಮಗಿಲ್ಲಾ ಹಿರಿ-ಕಿರಿದೆಂಬ ಬೇಧ-ಭಾವಂಗಳು 
ನಮಗಿಲ್ಲಾ ಬಣ್ಣದ ಬಾನಾಡಿಗಳೆಂಬ ಕನವರಿಕೆಯ ಭಂಗಿಗಳು | 

ನಮಗೆಲ್ಲಾ ಅಗೋಚರ ಶಕ್ತಿಯ ಸೃಷ್ಟಿಯೇ ವಾತಾಯನ 
ನಮಗೆಲ್ಲಾ ನಮ್ಮೆಲ್ಲರ ಸಮೂಹವೇ ಬೆಚ್ಚಗಿನ ರಕ್ಷಾಯನ | 

January 4 at 12:25pm 
************************************************


ಬಾಯಾರಿಸಿ ದಣಿವಾರಿಸಿಕೊ ನಿಲ್ಲದಿರಲಿ ಪಯಣ 
ರೆಕ್ಕೆ ಬಿಚ್ಚಿ ಎದೆ ಸೆಟೆಸಿಕೋ ಮುಂದುವರಿಯಲಿ ಯಾನ 

January 5 at 1:41pm 
************************************************


ಅಮ್ಮನಿಲ್ಲದ ಗುಬ್ಬಿಯಿಂಡು 
ನೋವಿನ ಅನ್ನವುಂಡು 
ವಾತ್ಸಲ್ಯದ ಹಪಹಪಿಕೆಗೆ
ಪ್ರೀತಿಯ ಗುಟುಕಿಗೆ
ಕಾದು ಕುಳಿತಿರೆ
ಅಮ್ಮನಿಲ್ಲ 
ತುತ್ತಿನ ಸವಿಯುಣಿಸಲು 
ಎರವಲಾಗಿ ಕೊಡುವಿರ 
ಯಾರಾದರು ಮಾತೃ ಪ್ರೇಮವ! 

- ಕನ್ನಡ ಶ್ರೀಗಂಧ. 

January 7 at 3:36pm 
************************************************


ಓ ಮನುಜರೇ....!
ನಮಗಿಲ್ಲ ನಿಮ್ಮಂತೆ ಮಹಲಿನ ಬಯಕೆ.. 
ಬಂಗಲೆಯಲೂ ಏಕಾಂಗಿಗಳು.. ನಿಮ್ಮಂತೆ ನಾವಲ್ಲ. 
ಕೂಡಿ ಬಾಳುವುದಾ..ಹಂಚಿ ತಿನ್ನುವುದಾ.. 
ನೋಡಿ ಕಲಿಯಿರೋ ನಮ್ಮಿಂದ...:) 

February 2 at 3:04pm 
************************************************


ಒಂದೇ ಗೂಡಲ್ಲಿ 
ನಾವು ಒಂದುಗೂಡಿಹೆವು 
ಒಂದೇ ಬಳ್ಳಿಯ ಹೂಗಳಂತೆ 

ಒಂದೇ ಬಳ್ಳಿಯಲಿ 
ಕುಳಿತಿಹೆವು ನಾವು 
       ಒಂದೇ ತಾಯಿಯ ಮಕ್ಕಳಂತೆ ..... 

February 2 at 3:44pm
************************************************


Sunday 5 February 2012

ಚಿತ್ರಗಳ ಕವನ .. :)

                        ಈ ಚಿತ್ರಗಳ ಕವನ ಅಂದರೆ ನೆನಪುಗಳ ಪುಸ್ತಕ.. ಇಲ್ಲಿ ಕವನ ಬರೆದವರ ನೆನಪು ನಮ್ಮಲ್ಲಿ ಸದಾ ಇರಲು ಅವೆಲ್ಲವನ್ನು ನಮ್ಮ ಬ್ಲಾಗ್ ಅಲ್ಲಿ ಹಾಕುತ್ತೇವೆ.. ಸುಮ್ಮನೆ ಎಲ್ಲೋ ಹೇಗೋ ಪರಿಚಯ ಆಗಿ .. ಹಾಯ್ ಬಾಯ್ .. ಅಷ್ಟಕ್ಕೇ ನಿಲ್ಲದೇ.. ಒಂದು ಉತ್ತಮವಾದ ಗುಣಲಕ್ಷಣಗಳನ್ನು ಬೆಳೆಸಿಕೊಳ್ಳುವ ಸ್ನೇಹ ಸಂಬಂಧವನ್ನು ಮರೆಯದಂತೆ ಗಟ್ಟಿಗೊಳಿಸುವ ಪ್ರಯತ್ನವಷ್ಟೇ ಈ ಚಿತ್ರಗಳ ಕವನ.. ಇದು ಯಶಸ್ವಿ ಆದಲ್ಲಿ .. ಎಲ್ಲರೂ ಸಹ ಉತ್ತಮ ಸ್ನೇಹ ಭಾವನೆಯಿಂದ ಮನದಾಳದ ಮಾತುಗಳನ್ನು ಹಂಚಿಕೊಂಡು ಜೀವನದಲ್ಲಿ ಏನಾದರೂ ಸಾಧಿಸುವ ಛಲ ಬಲಗಳಿಗೆ ಕಾರಣವಾಗಿ.. ನಮ್ಮ ಎಲ್ಲರ ಸಾಮಾಜಿಕ  ಜೀವನ ಶೈಲಿಯಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಸಹಾಯ ಆಗುತ್ತದೆ ಎನ್ನುವ ಒಂದು ನಂಬಿಕೆ ಮಾತ್ರ.. ಹಾಗು ಬರೆಯುವ ಮತ್ತು ಓದುವ ಆಸಕ್ತಿ ಹೆಚ್ಚಾಗಿ.. ಅನೇಕ  ಯುವ ಪ್ರತಿಭೆಗಳ ಭಾವನೆಗಳ ಬರಹಕ್ಕೆ ಅದು ಒಂದು ಮೆಟ್ಟಿಲು ಇದ್ದಂತೆ.. ಹಂತ ಹಂತವಾಗಿ ಬೆಳೆಯುತ್ತಾ ಬಂದಂತೆಲ್ಲ.. ಒಂದಲ್ಲಾ  ಒಂದು ದಿನ ಸಾಕಷ್ಟು ಕನ್ನಡ ಕವಿಗಳು , ಕಥೆಗಾರರು ಹುಟ್ಟಿಕೊಂಡು ನಮ್ಮ ಕನ್ನಡ ಅತಿಯಾಗಿ ಬೆಳೆಯುತ್ತದೆ .. ಉಳಿಯುತ್ತದೆ. ಮತ್ತು ಹೆಚ್ಚಿನ ಪ್ರಮಾಣದಲ್ಲಿ ಕನ್ನಡದಲ್ಲಿ ಮಾತುಕತೆಗಳು ನಡೆಯುವಲ್ಲಿ ಒಂದು ಅದ್ಭುತ ಪರಿಣಾಮಕಾರಿ ಮಾರ್ಗವಾಗಿ ನಮ್ಮ ಮುಂದೆ ಪ್ರಕಟವಾಗುತ್ತದೆ.. ಇಲ್ಲಿ ಸಮಯ ಸಿಕ್ಕಾಗೆಲ್ಲ ನಮ್ಮ ಸ್ವಂತ ಚಿತ್ರಗಳ ಮೂಲಕ ಒಂದು ವಿಷಯವನ್ನು ಅದರಲ್ಲಿ ಚಿತ್ರಿಸಿ.. ಅದಕ್ಕೆ ಶೀರ್ಷಿಕೆ ಕೊಟ್ಟು ಬರೆಯಲು ಹೇಳುತ್ತೇವೆ.. ಬರೆದವರ ಭಾವನೆಗಳ ಆರ್ಥವು ಎಲ್ಲರಿಗೂ ತಿಳಿಯುತ್ತದೆ.. ಆಗ ಯಾರು ಯಾವ ದೃಷ್ಟಿಕೋನದಲ್ಲಿ ಈ ಚಿತ್ರವನ್ನು ಗಮನಿಸುತ್ತಾರೆ.. ಮತ್ತು ಅದರ ಹಿನ್ನೆಲೆ ಏನು .. ಪದಗಳ ರಚನೆಯಲ್ಲಿ ಬರುವ ಭಾವದ ಮುಖ್ಯ ಉದ್ದೇಶ .. ಆ ಕವಿಯು ಹೇಳಬಯಸುವ ಒಂದು ಸಣ್ಣ ಸಂದೇಶ .. ಸಾಲುಗಳಲ್ಲಿ ಅಡಗಿದ ಒಳಾರ್ಥಗಳು .. ಅದರಿಂದ ಓದುಗನ ಜೀವನ ಶೈಲಿಯಲ್ಲಿ .. ಈ ಸಮಾಜದ ಕುರಿತು ಆಲೋಚಿಸುವ ಮುಕ್ತವಾದ ಮನಸ್ಸು.. ಎಲ್ಲೋ ಅಡಗಿ ಕೂತಿರುವ ನೈಜ ಲೇಖಕನ ಬರಹ ಶಕ್ತಿ ಎಲ್ಲವೂ ಇಲ್ಲಿ ಗೋಚರಿಸುತ್ತದೆ.. ಖಡ್ಗಕ್ಕಿಂತ ಲೇಖನಿ ಹರಿತ ಎನ್ನುತ್ತಾರೆ.. ಬರೆಯುವುದು ಇನ್ನೂ ಇದೆ.. ಆದರೆ ಈಗಲೇ ಎಲ್ಲವೂ ಬೇಡ .. ಮುಂದೆ ಮುಂದೆ ಬರೆಯುತ್ತಾ ಮತ್ತು ಚಿತ್ರಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಾ ಇರುತ್ತೇವೆ.. ಈ ಒಂದು ಉತ್ತಮ ಕಾರ್ಯಕ್ಕೆ ನಿಮ್ಮೆಲರ ಮುಕ್ತ ಮನಸ್ಸಿನ ಸಹಕಾರದ ಅಗತ್ಯವಿದೆ.. ನಾವು ನಮ್ಮವರು ಎಂದುಕೊಂಡು ಮುನ್ನಡೆಯೋಣ.. ದುಷ್ಪರಿಣಾಮಗಳ ಚಿಂತೆ ಮಾಡಲು ಇದು ಯುದ್ಧವಲ್ಲ.. ಭಾವನೆಗಳ ಹಂಚಿಕೊಳ್ಳುತ್ತ .. ಭಾಂದವ್ಯ ಬೆಸೆಯುತ್ತ.. ಸುಂದರ ಬದುಕನ್ನು ಕಟ್ಟುತ್ತಾ.. ಸ್ನೇಹ ನಂಬಿಕೆ ವಿಶ್ವಾಸಗಳ ಒಂದು ಬೆಸುಗೆ ಹಾಕುವ ವಸ್ತುವಾಗಿ.. ಒಂದು ಸದೃಡವಾದ ಮಾನವ ಶಕ್ತಿಯ ಸೈನ್ಯವನ್ನೇ ನಿರ್ಮಿಸುವಲ್ಲಿ ಮಹತ್ತರವಾದ ಕಾರಣವಾಗಿ ಈ ಚಿತ್ರಗಳ ಕವನ ಮೂಡಿಬರಬಹುದೆಂಬ ಒಂದು ಚಿಂತನೆ ನಮ್ಮದು.. ನಮ್ಮಂತೆಯೇ ಇಲ್ಲಿ ನಮ್ಮ ಸ್ನೇಹಿತರಾದ ಶ್ರೀ ಮಂಜುನಾಥ್ ರೆಡ್ಡಿ ಅವರು ಸಹ ಚಿತ್ರಗಳ ಕವನವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.. ಅವರು ಕೊಡುವ ಚಿತ್ರಗಳು ಸಹ ಏನಾದರೂ ಒಂದು ರೀತಿಯ ಉತ್ತಮ ಸಂದೇಶವನ್ನು ಒಳಗೊಂಡಿರುತ್ತದೆ.. ಅಲ್ಲೂ ಸಹ ಅನೇಕ ಆಸಕ್ತರು ಅವರವರ ಭಾವನೆಗಳನ್ನು ಬರೆದಿರುತ್ತಾರೆ.. ಅವೆಲ್ಲವನ್ನು ಸೇರಿಸಿ ಒಂದು ಬ್ಲಾಗ್ ಮಾಡಿ.. ಕವನ ಸಂಗ್ರಹ ಮಾಡುವ ಬಯಕೆ ಇದೆ..  ಇನ್ನು ಮುಂದೆ ಚಿತ್ರಗಳಿಗೆ ಕವನ ಬರೆಯುವ ಎಲ್ಲಾ ಕವಿಗಳ ಹೆಸರು ಸಹಿತ .. ಅವರ ಎಲ್ಲಾ ಕವನಗಳನ್ನು ಈ ವಿಶೇಷ ಬರಹಗಾರ ಬ್ಲಾಗ್ ಅಲ್ಲಿ ಹಾಕುತ್ತೇವೆ..   ಈ ಒಂದು ಹೊಸ ಹವ್ಯಾಸವನ್ನು ರೂಡಿಸಿಕೊಳ್ಳುವ ಆಲೋಚನೆ ಇದೆ.. ಇದಕ್ಕೆ ನಿಮ್ಮ ಅನಿಸಿಕೆ ಅಭಿಪ್ರಾಯ ಏನು ಎಂಬುದನ್ನು ವಿಚಾರ ವಿವರಣೆಯ ಸಹಿತ ಸ್ಪಷ್ಟವಾಗಿ ಬರೆದು ತಿಳಿಸಿ..  ಮನದಾಳದ ಮಾತುಗಳನ್ನು ಹಂಚಿಕೊಳ್ಳವ ಅವಕಾಶ ಕಲ್ಪಿಸಿದ್ದಕ್ಕೆ .. ಮನಸ್ಪೂರ್ವಕ ಧನ್ಯವಾದಗಳು.. :)

|| ಪ್ರಶಾಂತ್ ಖಟಾವಕರ್ ||