Friday 22 June 2012

ಒಂದು ವರ್ಷದ ಸರ್ಕಾರಿ ಶಾಲೆ (A year in government school)

ಒಂದು ವರ್ಷದ ಸರ್ಕಾರಿ ಶಾಲೆ (A year in government school)
***************************************************************
ಇದು ನಿಜ.. ಅದೇನೆಂದರೆ ನಾವು ಹುಬ್ಬಳ್ಳಿಯಲ್ಲಿ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿ ಓದೋವಾಗ ನಮಗೆಲ್ಲಾ ಒಂದು ಪುಸ್ತಕವನ್ನೇ ಮಾಡಿಸಿದ್ದರು .. ಅದಕ್ಕೆ ಹೆಸರು ಒಳ್ಳೆಯ ಕೆಲಸ .. ನಾವು ಆ ದಿನ ಮಾಡಿದ ಒಳ್ಳೆಯ ಕೆಲಸವನ್ನು ಅದರಲ್ಲಿ ಬರಿಯಬೇಕಿತ್ತು .. ಯಾವುದೇ ದಿನ ತಪ್ಪಿದರೂ ಆ ದಿನ ಮೇಷ್ಟ್ರು ತುಂಬಾ ಬೈಯುತ್ತಿದ್ದರು.. ಆದರೆ ಅದರಲ್ಲಿ ಮತ್ತೊಂದು ವಿಶೇಷ ಅಂದರೆ ನಮ್ಮ ಶಾಲೆಯಲ್ಲಿ ಚುನಾವಣೆ ಅಂತಾ ಮಾಡಿ , ಅದರಿಂದ ವಿದ್ಯಾರ್ಥಿ ನಾಯಕ ಮತ್ತು ನಾಯಕಿ ಅಂತ ಇಬ್ಬರನ್ನು ಆಯ್ಕೆ ಮಾಡ್ತಾ ಇದ್ರೂ .. ಆಗ ಮೊದಲ ಎರಡು ತಿಂಗಳು ಹುಬ್ಬಳ್ಳಿ ಊರು ಮತ್ತು ಶಾಲೆ ಹೊಸದು ಆದ್ದರಿಂದ ಸುಮ್ಮನೆ ಗೆಳಯರು ಯಾರಿಗೆ ಹೇಳ್ತಾರೋ ಅವರಿಗೆ ಓಟ್ ಹಾಕಿದ್ವಿ .. ಹೀಗೆ ದಿನಗಳು ಉರುಳಿದಂತೆ ಒಂದು ದಿನ ಆಶುಭಾಷಣ ಸ್ಪರ್ಧೆ ಅಂತಾ ನಡಿತು .. ಅದರಲ್ಲಿ ಶಾಲೆಯ ಆಟದ ಮೈದಾನ ಅನ್ನೋದು ಚೀಟಿಯಲ್ಲಿ ಸಿಕ್ಕ ವಿಷಯ .. ಅದಕ್ಕೆ ಐದು ನಿಮಿಷ ಮಾತಾಡಿದ್ದು ಕೇಳಿ ಕೆಲವು ಸ್ನೇಹಿತರು ನಮಗೇನು ಹೇಳದೆ ಚುನಾವಣೆಯಲ್ಲಿ ನಮ್ಮ ಹೆಸರು ಅಭ್ಯರ್ತಿಯಾಗಿ ಸೇರಿಸಿದ್ದಾರೆ.. ಆಗ ಬೇಡ ಅಂತಾ ಹೇಳಿ ನಮ್ಮ ಮೇಷ್ಟ್ರಿಗೆ ಹೇಳಿದ್ದಕ್ಕೆ ಹಾಗೆಲ್ಲಾ ವಾಪಾಸ್ಸು ತೆಗೆಯೋ ಹಾಗಿಲ್ಲಾ ಅಂದರು .. ನಾನು ಸಹ ಸುಮ್ಮನಾದೆ .. ಆದರೆ ಅದು ಒಂದು ಓಪನ್ ಎಲೆಕ್ಷನ್ .. ನಮ್ಮ ನೇಮ್ ಬೋರ್ಡ್ ಮೇಲೆ ಇರುತ್ತೆ .. ಅದರ ಕೆಳಗೆ ಒಬ್ಬೊಬ್ಬರೇ ಬಂದು ಒಂದು ಗೆರೆ ಹಾಕಬೇಕು (ಒಂದು ಅಂತ ಬರೀಬೇಕು) ಆಗ ಮೊದಲು ಹತ್ತು ಓಟ್ ಆಗೋವರೆಗೂ ನಮ್ಮ ಹೆಸರಿನ ಕೆಳಗೆ ಇದ್ದದ್ದು ಮೂರು ಮತ್ತು ನಮ್ಮದೊಂದು ಓಟ್ .. ಒಟ್ಟು ನಾಲ್ಕು ಮತಗಳು.. ಹಾಗೆಯೇ ಅದು ಮುಂದೆ ಮುಂದೆ ಸಾಗಿ ಮೂವತ್ತು ಓಟ್ ಮುಗಿದರೂ ಸಹ ನಾಲ್ಕೇ ಆಗಿತ್ತು .. ಇನ್ನೂ ಒಂದು ವಿಶೇಷ ಅಂದರೆ ನಮಗೆ ಎಲೆಕ್ಷನ್ ಅಲ್ಲಿ ನಿಲ್ಲೋಕ್ಕೆ ಇಷ್ಟ ಇಲ್ಲದೆ ಕಾರಣ ಬೇರೆಯವರಿಗೆ (ಅಂದರೆ ಹಿಂದಿನ ತಿಂಗಳು ಗೆದ್ದವರಿಗೆ) ಓಟ್ ಮಾಡೋಕ್ಕೆ ಹೋದರೆ , ನಮ್ಮ ಮೇಷ್ಟ್ರು ಹೇಳಿದ್ದು ಆ ರೀತಿ ಓಟ್ ಬೇರೆಯವರಿಗೆ ಹಾಕೋ ಹಾಗಿಲ್ಲಾ ಅಂತಾ.. ಅದಕ್ಕೆ ನಾವೇ ನಮ್ಮ ಹಾಕ್ಕೊಂಡಿದ್ದು .. ಅದು ಎಲ್ಲಾ ಮತದಾನ ಮುಗಿಯುವ ಅಷ್ಟೊತ್ತಿಗೆ ಒಂದು ಆಶ್ಚರ್ಯ ನಮಗಾಗಿ .. ಅದು ನಲವತ್ತಾರನೇ ಓಟ್ ಇಂದ ಎಲ್ಲ ಹುಡುಗ/ಹುಡುಗಿಯರು ನಮ್ಮ ಹೆಸರಿನ ಕೆಳಗೆ ಓಟ್ ಹಾಕಿದ್ದು.. ಅಲ್ಲಿಂದ ಇನ್ನೂರ ಮೂವತ್ತೆರಡು ಮತಗಳ ಅಂತರದಲ್ಲಿ ಗೆದ್ದ ನಂತರ ಆರು ತಿಂಗಳು ನಮ್ಮನ್ನೇ ಆಯ್ಕೆ ಮಾಡಿ ಗೆಲ್ಲಿಸುತ್ತಿದ್ದರು .. ಚಿತ್ರದುರ್ಗದಿಂದ ಹುಬ್ಬಳ್ಳಿಗೆ ಹೋದ ನಾವು ಅಲ್ಲಿ ಇದ್ದದ್ದು ಎಂಟು ತಿಂಗಳು ಮಾತ್ರ .. ಹಾಗೂ ನಂತರದಲ್ಲಿ ರಾಣೆಬೆನ್ನೂರಿಗೆ ಬಂದೆವು .. ಅಲ್ಲಿಯೂ ಸರ್ಕಾರಿ ಶಾಲೆ ಹಾಗು ಅಲ್ಲಿಯೂ ಮತ್ತೆ ಒಂದು ತಿಂಗಳಾದ ಮೇಲೆ ವಿದ್ಯಾರ್ಥಿ ನಾಯಕ ಪಟ್ಟ.. ಇಷ್ಟು ಕಥೆ ನಮ್ಮ ಶಾಲಾ ದಿನಗಳ ಆ ಸವಿನೆನಪುಗಳನ್ನು ಮತ್ತೊಮ್ಮೆ ಒಂದು ನೈಜ ಕಥೆಯನ್ನಾಗಿ ಎಲ್ಲರ ಮುಂದೆ ತರಲು ಕಾರಣರಾದ ನಮ್ಮ ಸ್ನೇಹಿತರೊಬ್ಬರಿಗೆ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇವೆ.. ಹಾಗೂ ಇದರಲ್ಲಿ (ಕಥೆಯಲ್ಲಿ) ಕೆಲವು ಮುಖ್ಯ ಅಂಶಗಳನ್ನು ಮತ್ತೊಂದು ಕಥೆಯಾಗಿ ಹೇಳುತ್ತೇವೆ... ಹಾಗೂ ಈ ಕಥೆಯಲ್ಲಿ ಆಸಕ್ತಿ ಹುಟ್ಟಿಸುವ ಅಂಶಗಳು ಏನೂ ಇಲ್ಲ.. ಇದೆಲ್ಲಾ ಕೇವಲ ನೆನಪುಗಳು (ಕಥೆಯ ಆರಂಭವಷ್ಟೇ) .. ಮಾತನಾಡುವ ಭಾಷೆ ಬದಲಾಗಿ , ವಾಸ ಮಾಡುವ ಸ್ಥಳವು ಬದಲಾಗಿ ಮರೆಯಲಾಗದ ಆ ಒಂದು ವರ್ಷ .. ಹೌದು ಅದು ನಾವು ಸರ್ಕಾರಿ ಶಾಲೆಯಲ್ಲಿ (ಹುಬ್ಬಳ್ಳಿ ಮತ್ತು ರಾಣೆಬೆನ್ನೂರು) ಕಲಿತ ದಿನಗಳ ಕಥೆಯು.. ನಮ್ಮ ಮನದಾಳದ ಮಾತುಗಳಿಗಾಗಿ ಮಾಡಿರುವ "ವಿಶೇಷ ಬರಹಗಾರ" ಬ್ಲಾಗ್ ಅಲ್ಲೂ ಸಹ ಪ್ರಕಟಿಸುತ್ತೇವೆ.. & ಇದರಲ್ಲಿ ಕೆಲವು ಲವ್ ಸ್ಟೋರಿಗಳು , ಸೆಂಟಿಮೆಂಟ್'ಗಳು , ಸಸ್ಪೆನ್ಸ್ , ಅಧ್ಯಾತ್ಮ , ಸ್ಪೋರ್ಟ್ಸ್ ... ಎಲ್ಲಾ ಸೇರಿದ ಒಂದು ಸಿನಿಮಾ ಕಥೆಯಾಗಿ ಆಗಬಹುದು .. ಹಾಗೂ ಕೆಲವರಿಗಂತೂ ಸವಿ ಸವಿ ನೆನಪು ಅಂತಾ "ಮೈ ಆಟೋಗ್ರಾಫ್" ಕನ್ನಡ ಚಲನಚಿತ್ರದ ನೆನಪು ಆಗಬಹುದು .. ಕೊನೆಯಲ್ಲಿ ನಾಯಕನಿಗೆ ಮದುವೆ ಆಗುತ್ತೆ .. ಆದರೆ ನಾ ಹೇಳುವ ಕಥೆಯು ಸಂಪೂರ್ಣ ಸ್ವಂತದ್ದು ಮತ್ತು ಈ ಕಥೆಯಲ್ಲಿ ನಾಯಕನಿಗೆ ಇನ್ನೂ ಮದುವೆ ಆಗಿಲ್ಲ.. ಇದು ಒಬ್ಬ ಸ್ನೇಹಿತರು ನೆನಪು ಮಾಡಿಸಿದ ಕಥೆ .. ಸ್ವಂತ ಅನುಭವಗಳ ಒಂದು ವರ್ಷದ ಸರ್ಕಾರಿ ಶಾಲೆಯ ಮತ್ತು ಸ್ನೇಹಿತರ ಕಥೆ.. :)
ದಯವಿಟ್ಟು ಕಾದು ನೋಡಿ ... ಆಮೇಲೆ ಓದಿ ನಿಮ್ಮ ಅನಿಸಿಕೆ ಹಂಚಿಕೊಳ್ಳಿ .. ಸತ್ಯವನ್ನು ಬರೆಯಲು ಹೆಚ್ಚಿನ ಸಮಯ ಬೇಕಾಗಿಲ್ಲ ಆದರೆ ಈ ಮೊದಲೇ ಆರಂಭಿಸಿದ "ನಾನು ನನ್ನ ಕವನ" ಎಂಬ ಕಾಲ್ಪನಿಕ ಕಥೆಯ ಮುಗಿಸಿದ ನಂತರ , ಈ ಕಥೆಯನ್ನು ಪ್ರಾರಂಭಿಸುತ್ತೇವೆ .. ಎಲ್ಲರಿಗೂ ಶುಭವಾಗಲಿ .. 
* ಓಂ ಶ್ರೀ ಗಣೇಶಾಯ ನಮಃ *

Sunday 17 June 2012

ಚಿತ್ರಮಂದಿರಗಳು ಸಮಸ್ಯೆಗಳು



ಹೆಚ್ಚಿನ ಚಲನಚಿತ್ರಗಳ (ಉತ್ತಮ ಚಿತ್ರಗಳ) .......
ಸೋಲು (ಜನ ಮನ್ನಣೆ ಅಥವಾ ಪ್ರೋತ್ಸಾಹ ಸಿಗದಿರುವುದು) ...........

ಇದಕ್ಕೆ ಒಂದು ರೀತಿಯಲ್ಲಿ ಚಿತ್ರಮಂದಿರಗಳು ಸಹ ಕಾರಣವಾಗುತ್ತಿವೆ..
ಚಿತ್ರಮಂದಿರಗಳ ಶುಚಿತ್ವ , ನೀರಿನ ವ್ಯವಸ್ಥೆ , ಆಸನಗಳ (ಚೇರುಗಳ) ಗುಣಮಟ್ಟವೂ ಸಹ ಹಾಗೂ ಜೊತೆಯಲ್ಲಿ ವಾಹನ ನಿಲುಗಡೆ (ಪಾರ್ಕಿಂಗ್ ) .... ಇನ್ನೂ ಅನೇಕ ರೀತಿಯ ಸಮಸ್ಯೆಗಳು ಜನರನ್ನು ಇತ್ತೀಚಿಗೆ ಚಿತ್ರಮಂದಿರಗಳತ್ತ ಹೋಗುವುದೋ ಬೇಡವೋ ಎಂದು ಆಲೋಚಿಸುವಂತೆ ಮಾಡಿದೆ.. ಇದಕ್ಕೆಲ್ಲಾ ಬೇಗನೆ ಒಳ್ಳೆಯ ಪರಿಹಾರಗಳನ್ನು ಕಂಡುಕೊಳ್ಳದಿದ್ದರೆ ಚಿತ್ರಮಂದಿರಗಳತ್ತ ಜನರನ್ನು ಕರೆತರುವುದು ತುಂಬಾ ಕಷ್ಟವಾಗಬಹುದು .. ಒಮ್ಮೆ ಎಲ್ಲರೂ ಇದರ ಬಗ್ಗೆ ಆಲೋಚಿಸಿ ಎಂದು ನಮ್ಮ ಅನಿಸಿಕೆ + ಅಭಿಪ್ರಾಯಗಳನ್ನು ತಿಳಿಸುತ್ತಿದ್ದೇವೆ.. :)

ಎಲ್ಲರಿಗೂ ಒಳ್ಳೆಯದಾಗಲಿ .....
* ಓಂ ಶ್ರೀ ಗಣೇಶಾಯ ನಮಃ *

|| ಪ್ರಶಾಂತ್ ಖಟಾವಕರ್ ||

Saturday 9 June 2012

ಹೊಸ ಸಿನಿಮಾ + ನಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳು .. :)


ಚಿತ್ರ ಇಷ್ಟ ಆಗದೆ ಇರುವುದಕ್ಕೆ ಕಾರಣ ಹೆಚ್ಚು ಹೆಚ್ಚು ಚಿತ್ರಗಳ ಬಿಡುಗಡೆ ಏಕಕಾಲಕ್ಕೆ ..


ರಸ್ತೆ ಕಾಮಗಾರಿ, ಅಲ್ಲಲ್ಲಿ ಪೈಪ್`ಲೈನ್ , ಕೇಬಲ್ ವರ್ಕ್ , ದೊಡ್ಡ ದೊಡ್ಡ ಊರುಗಳಲ್ಲಿ ಫ್ಲೈಓವರ್ ... ಹೀಗೆಲ್ಲಾ ಆಗಿ ಹೆಚ್ಚು ತೊಂದರೆ ಚಿತ್ರಮಂದಿರಗಳತ್ತ ಬರಲು .. 


ರಜಾ ದಿನಗಳಲ್ಲಿ ಸಂಬಂಧಿಕರು ಊರಿಗೆ ಬಂದಾಗ .. ಸಿನಿಮಾ ಎಲ್ಲಾ ಬೇಡ ನಮ್ಮೂರಲ್ಲಿ ನೋಡ್ತೀವಿ .. ಅದನ್ನು ಬಿಟ್ಟು ಬೇರೆ ಏನಾದರೂ ತೋರಿಸಿ (ದೇವಸ್ಥಾನ , ಹೋಟೆಲ್ , ಪಾರ್ಕ್ , ಹೊಸ ಶಾಪಿಂಗ್ ಕಾಂಪ್ಲೆಕ್ಸ್ , ಪ್ರೇಕ್ಷಣೀಯ ಸ್ಥಳಗಳು) ಅಂತಾ ಕೇಳ್ತಾರೆ .. 


ತಕ್ಷಣಕ್ಕೆ ಒಂದು ಚಿತ್ರದ ಬಗ್ಗೆ ಮೊಬೈಲ್ ಅಲ್ಲಿ ಮಾತುಕತೆ .. ನಂತರ  ಮನೆಯಲ್ಲಿ ನಮ್ಮ ಫ್ರೆಂಡ್ ಹೇಳಿದ ಆ ಸಿನಿಮಾ ಸೂಪರ್ ಇದೆ ಅಂತಾ ಒಬ್ಬರು , ಇದೇ ರೀತಿ ಮತ್ತೊಬ್ಬರು .. ಅಣ್ಣ ತಮ್ಮ ಅಕ್ಕ ತಂಗಿ ... ಹೀಗೆ ಕಿತ್ತಾಡಿ ಕೊನೆಯಲ್ಲಿ ಯಾವುದೋ ಒಂದು ಸಿನಿಮಾ ನೋಡೋಕ್ಕೆ ಅಷ್ಟೇ ಸಾಧ್ಯ ..  


ಈ ಎಲ್ಲದರ ನಡುವೆ ಹೊಸ ಸಿನಿಮಾ ಹೇಗಿದೆ ಅನ್ನುವ ಆಲೋಚನೆಯೇ ಇರುವುದಿಲ್ಲ .. 
ಪ್ರೇಕ್ಷಕ ಉತ್ತಮ ಸಿನಿಮಾಗಳನ್ನು ಆಯ್ಕೆ ಮಾಡುವಲ್ಲಿ ಬುದ್ದಿವಂತ ಎನ್ನುವುದು ನಿಜ ಒಪ್ಪುತ್ತೇವೆ .. ಆದರೆ ಇನ್ನೂ ಒಂದು ಆಯಾಮದಲ್ಲಿ ಆಲೋಚನೆ ಮಾಡಿದಲ್ಲಿ ಪ್ರೇಕ್ಷಕ ತನ್ನ ಬುದ್ದಿಯನ್ನು ಹೊಸ ಚಿತ್ರಗಳ ಗುಣಮಟ್ಟ ಅಳೆಯಲು ಉಪಯೋಗಿಸುತ್ತಿಲ್ಲ ಅನ್ನುವುದೂ ಸಹ ನಿಜವೇ ಆಗಿದೆ..
ಹೀಗಿರುವಾಗ ಚಿತ್ರರಂಗದಲ್ಲಿ ಹೊಸ ಹೊಸ ರೀತಿಯಲ್ಲಿ , ಹತ್ತಾರು ದೃಷ್ಟಿಕೋನಗಳಲ್ಲಿ ಆಲೋಚಿಸಿ ಪ್ರಚಾರ ಕಾರ್ಯ ಮಾಡಬೇಕು .. ನಮ್ಮಿಂದ ಆಗುವಷ್ಟು ಪ್ರಚಾರದ , ಪ್ರೋತ್ಸಾಹದ  ಕಾರ್ಯವನ್ನು ನಾವಂತೂ ಹೊಸ ಹೊಸ ಪ್ರತಿಭೆಗಳಿಗೆ ಕೊಟ್ಟೆ ಕೊಡುತ್ತೇವೆ.. ಆ ಹೊಸತನ ನಮಗಿಷ್ಟವಾದಲ್ಲಿ ಖಂಡಿತ ಪ್ರೋತ್ಸಾಹ ಬೆಂಬಲಗಳಿಗೆ ಸಾಧ್ಯವಾದಷ್ಟೂ ಜನರನ್ನು ಸೇರಿಸುತ್ತೇವೆ .. ಹೊಸ ಹೊಸ  ರೀತಿಯ  ಪ್ರಚಾರ  ಹಾಗೂ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯ  ಮುಂದುವರಿಸಬೇಕು ಎನ್ನುವುದು ನಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳು .. :)